ಸಂತಸದ ಚಿಲುಮೆ

ಸಂತಸದ ಚಿಲುಮೆ

ಚಿತ್ರ: ಅಲೆಜಾಂಡ್ರ ಜಿಮೆನೆಸ್
ಚಿತ್ರ: ಅಲೆಜಾಂಡ್ರ ಜಿಮೆನೆಸ್

ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ.

ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು – ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ ಎಂಬುದನ್ನು ನಾ ತಿಳಿದುಕೊಂಡಿಲ್ಲ. ಹೀಗಾಗಿ ನಾ ಹೇಗೆ ಹೇಳಲಿ?’ ಎಂದು ತನ್ನ ಅಳಲನ್ನು ಮಹಾರಾಜನ ಮುಂದೆ ತೋಡಿಕೊಂಡ.

‘ಸಂತಸವೆನ್ನುವುದು ನಮಗಾಗಿ ನಮ್ಮಮ ಸಂಸಾರಕ್ಕಾಗಿ ಮೂರು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಕಷ್ಟಪಡುವುದರಲ್ಲಿ ಬಲು ಸಂತಸವಿದೆ. ಏನು ಇಲ್ಲದವರು ಗಳಿಸಿ ಉಳಿಸಿ ಮನೆ, ಮಠ, ಹೊಲ ಗದ್ದೆ ತೋಟ ಕಾರು ಜೀಪು ಮಾಡಿದಾಲೇ ಸಂತಸದ ಚಿಲುಮೆ ಚಿಮ್ಮುವುದು…..’ ಎಂದು ಅನುಭವಿಯೊಬ್ಬ ವಿವರಿಸುತ್ತಾ ನಿಂತ.

ಮೊದಲಸಾಲಿನಲ್ಲಿ ಕುಳಿತಿದ್ದ ವೇದಾಂತಿಯೊಬ್ಬ ಎದ್ದುನಿಂತು ಮಹಾರಾಜಾಧಿರಾಜ……. ದಿನ ನಿತ್ಯ ಮೂರು ಹೊತ್ತು ನದಿಯಲ್ಲಿ ಮುಳುಗಿ ನಾನಾ ಪುಷ್ಪಗಳ ಹರಿದು ತಂದು ನಾರು ಮಡಿಯಲಿ ದೇವನಿಗೆ ಪೂಜಿಸಿ ಭಜಿಸಿ ನೇಮ ನಿಯಮ ಪಾಲಿಸಿ ವ್ರತ ಯಜ್ಞಯಾಗಾದಿಗಳ ಮಾಡಿ ಪ್ರಸಾದ, ತೀರ್ಥ, ನೈವೇದ್ಯ ಸ್ವೀಕರಿಸಿದರೆ ಸಂತಸದ ಹೊನಲು ಹರಿಯುವುದು……’ ಎಂದು ವರ್ಣಿಸುತ್ತಾ ನಿಂತ.

ಕವಿಯೊಬ್ಬ ಎದ್ದು ನಿಂತು ‘ಕಾವ್ಯ, ನಾಟಕ, ಕಾದಂಬರಿ, ಹಾಸ್ಯ ಪ್ರಸಂಗಗಳ ರಸವತ್ತಾಗಿ ರಚಿಸಿ, ರಸಿಕ ಶಿಖಾ ಮಣಿಗಳಿಂದ ಹೊಗಳಿಸಿಕೊಳ್ಳುವುದರಿಂದ ಸಂತಸದ ಚಿಲುಮೆ ಚಿಮ್ಮುವುದು! ಚೈತನ್ಯದ ಚಿಲುಮೆ ಹೊಮ್ಮುವುದು! ಸ್ಫೂರ್ತಿಯ ಚಿಲುಮೆ ರಂಗೇರುವುದು…..’ಎಂದು ಕಾವ್ಯಮಯವಾಗಿ ಸಂತಸದಿ ಹೇಳಿದ.

ಅಷ್ಟರಲ್ಲಿ ಅಲ್ಲೇ ಇದ್ದ ಬೀರಬಲ್ಲ ಮಹಾಶಯ ಎದ್ದು ನಿಂತು ಮಹಾರಾಜರಿಗೆ, ಸಭೆಗೆ ವಂದಿಸಿ, ’ಮಹಾಪ್ರಭು…..ಸಂತಸದ ಚಿಲುಮೆ ಹರಸಿ ನಾವ್ಯಾರು ಅಡವಿಗೊಡಬೇಕಾಗಿಲ್ಲ, ಖಾವಿ ಧರಿಸಬೇಕಾಗಿಲ್ಲ. ಗುಡಿಗುಂಡಾರ ಸುತ್ತಿ ಪುಣ್ಯನದಿ ತೀರ್ಥಗಳಲ್ಲಿ ಮುಳಗಬೇಕಾಗಿಲ್ಲ. ಮೂಗು ಹಿಡಿದು ಕಣ್ಣುಮುಚ್ಚಿ ತಪಸ್ಸು ಮಾಡಬೇಕಾಗಿಲ್ಲ! ಪ್ರತಿನಿತ್ಯ ಮನಸ್ಸಿನಲ್ಲಿ ಚಿಂತನಾ ಮಂಥನ ನಡೆಸಬೇಕು. ಸಂತಸದ ಚಿಲುಮೆ ನನ್ನಲ್ಲಿಯೇ ಇದೆ ಎಂಬ ಆತ್ಮವಿಶ್ವಾಸ ಬೇಕು. ತಾಳ್ಮೆ, ಆತ್ಮ ತೃಪ್ತಿ, ದಮೆ, ಕರುಣೆ, ಶಾಂತಿ, ದಾನಧರ್ಮ-ಕ್ಷಮೆ ಇರಬೇಕು! ನಿಸ್ವಾರ್ಥ ಜೆವನದಲ್ಲಿ ತ್ಯಾಗದಲ್ಲಿ ಸಂತಸದ ಚಿಲುಮೆ ಇದೆ. ಕಾಣಬೇಕು… ಅದು ದಿನೇ ದಿನೇ ನಮಗೆ ಗೊತ್ತಾಗುತ್ತಾ ಹೋಗುತ್ತದೆ…’ ಎಂದು ವಿವರಿಸುತ್ತಾ ನಿಂತ.

ಅಲ್ಲಿದ್ದವರೇನು….. ಸ್ವತಃ ಅಕ್ಬರ್ ಮಹಾರಾಜ ಬೀರಬಲ್ಲನ ವಿವರಣೆಗೆ ಸಂತಸ ಉಕ್ಕಿ ಬಂತು. ಎಲ್ಲರೂ ಜೋರಾಗಿ ಕರತಾಡನ ಮಾಡಿ ಸಂತಸ ವ್ಯಕ್ತಪಡಿಸಿದರು.

ಅಲ್ಲಿಗೆ ಅಂದಿನ ಸಭೆಯು ಮುಕ್ತಾಯಗೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾತ್ಸಲ್ಯ
Next post ಮಿಂಚುಳ್ಳಿ ಬೆಳಕಿಂಡಿ – ೨

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys